ನಟ್ಟಿರುಳಿನಲ್ಲೊಂದು ಸಂವಾದ

ಬೆಳಕು

ಬೇಡವಾದರೆ
ಇಲ್ಲ
ಇಲ್ಲಿ ಏನೂ ಆಗಿಯೇ ಇಲ್ಲ
ಆಗಿದ್ದು ಆಟವಷ್ಟೇ
ಲೆಕ್ಕವಲ್ಲ
ಜಮಾ ಆಗಿಲ್ಲ
ಎನ್ನುತ್ತಾ ಯಾವುದಕ್ಕೂ ಬದ್ಧವಾಗದೇ
ಎಲ್ಲಾ ಕೊಡವಿ
ಎದ್ದು ಹೋಗಿಬಿಡಬಹುದು
ಕತ್ತಲು

ಬೇಡದ್ದೆಲ್ಲಾ ಒಪ್ಪಿ
ತೋಳ್ತೆರೆದು ಅಪ್ಪಿ
ತುಂಬಿ ತುಂಬಿ
ಮೇಲೇರಿ ಬರುವ
ಎಲ್ಲ ಅಮಲುಗಳ
ಒಳಕದುಮಿ ಗುದ್ದಿ
ಹೇಗೆ ಬರೆಯುವುದು
ಪರಂಪರಾಗತವಲ್ಲದ
ಶಾಸ್ತ್ರೋಕ್ತವಲ್ಲದ
ಛಂದೋಬದ್ಧವಲ್ಲದ
ಆದರೂ ಅರ್ಥಪೂರ್ಣ ಕವಿತೆ!

ಬೆಳಕು

ಬಿಡು ಮನಸು ಮಾಡಿದರೆ
ಸಮುದ್ರಗಳನ್ನೇ ದಾಟಿಬಿಡಬಹುದು

ಕತ್ತಲು

ಹೌದು. ಆದರೆ ಎಲ್ಲಕ್ಕೂ ಮೊದಲು
ದಾಟಬೇಕು ಹೊಸಿಲು !
ಹೊಸಿಲಿನೊಳಗಿಂದ ಜಗ್ಗುವ
ಗೋಜಲು ಬೇರುಗಳು
ಹೊರಗಿನಿಂದ ಸೆಳೆಯುವ
ಆಕಾರವಿಲ್ಲದ ಅಸ್ಪಷ್ಟಾಕಾರಗಳು.

ಬೆಳಕು

ಇಲ್ಲಿ ಯಾವುದೂ
ಪರಿಪೂರ್ಣ ಆಕಾರವಲ್ಲ
ನಿರಾಕಾರಕ್ಕೆ ಆಕಾರ ಕೊಡುವುದೇ
ಕರಗಳ ಕೆಲಸವೆಲ್ಲ
ಇತಿಹಾಸವಾಗಿ ಬಿಡುತ್ತದೆ
ಆಕಾರವಾದದ್ದೆಲ್ಲ.

ಕತ್ತಲು

ಹೊಸಿಲು ದಾಟಿದವರಿಗೆಲ್ಲ
ಒಂದೋ ಪ್ರಪಾತ
ಇಲ್ಲವೇ ಆಕಾಶ
ಬೇರೆಲ್ಲಿದೆ ಅವಕಾಶ?
ಎರಡು ಅತಿಗಳ ನಡುವೆ
ಇದೆಯೇ ಎಲ್ಲೆ ಮೀರುವ ಮಿತಿ?

ಬೆಳಕು

ಸವಕಲಾದ ಬೊಟ್ಟಿನ
ತೂಗುವ ತಕ್ಕಡಿಯ
ಅಳತೆಗಾಗಿಯೇ
ಬದುಕಲಾಗುವುದಿಲ್ಲ
ಅತೀತರೆಲ್ಲ ಅಳತೆಗೆ ಸಿಕ್ಕುವುದಿಲ್ಲ
ಅಳತೆಗಳ ಮಿತಿಗೆ ಬಿದ್ದವರು
ಬಿಡು ಅತೀತರಾಗುವುದಿಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ್ರ ನೀನೊಬ್ಬನೆ
Next post ಖರ್ಗೆಯೇ ಕೂಗಾಡ್ಲಿ ಸಿದ್ದುವೇ ಹೋರಾಡ್ಲಿ ಸಿ‌ಎಂ ನೆಮ್ಮದಿಗೆ ಭಂಗವಿಲ್ಲ…!

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys